Sign up to save your library
With an OverDrive account, you can save your favorite libraries for at-a-glance information about availability. Find out more about OverDrive accounts.
Find this title in Libby, the library reading app by OverDrive.

Search for a digital library with this title
Title found at these libraries:
Library Name | Distance |
---|---|
Loading... |
'ಎನ್ ಕೌಂಟರ್' ಕುಂ.ವೀರಭದ್ರಪ್ಪ ಅವರು ಬರೆದಿರುವ ನೈಜ ಘಟನೆಯಾಧಾರಿತ ಕಾದಂಬರಿ. ಈ ಕತೆಯ ಮೂಲ ಹುಟ್ಟಿದ್ದು ಐಪಿಎಸ್ ಅಧಿಕಾರಿ ಶಂಕರ ಬಿದರಿಯವರು ಹೇಳಿದ ನೈಜ ಘಟನೆಯೊಂದರಿಂದ ಎನ್ನುತ್ತಾರೆ ಕಾದಂಬರಿಕಾರ ಕುಂವೀ. ಶಂಕರ ಬಿದರಿಯವರು ಬಳ್ಳಾರಿಯಲ್ಲಿ ಭೀಮ್ಲಾ ನಾಯಕ್ ಹೆಸರಿನ ಕುಖ್ಯಾತನನ್ನು ಎನ್ ಕೌಂಟರ್ ಮಾಡಿದ್ದು 1990, ಸೆಪ್ಟೆಂಬರ್ ಮಾಹೆಯಲ್ಲಿ. ಆ ಎನ್ ಕೌಂಟರ್ ನ ನೆನಪುಗಳನ್ನು ಲೇಖಕ ಕುಂ.ವೀರಭದ್ರಪ್ಪನವರಲ್ಲಿ ಹಂಚಿಕೊಂಡ ಬಿದರಿ ಅವರು 'ಈ ಕುರಿತು ಬರೆಯಿರಿ ' ಎಂದು ತಿಳಿಸಿದ ಕಾರಣದಿಂದ ಈ ಕಾದಂಬರಿಯನ್ನು ಬರೆದದ್ದಾಗಿಯೂ ಲೇಖಕರು ತಿಳಿಸಿದ್ದಾರೆ. ಭೀಮ್ಲಾ ನಾಯಕ ಕ್ರಿಮಿನಲ್ ಕೃತ್ಯಗಳನ್ನು ಮೈಮೇಲೆಳೆದುಕೊಂಡು, ಚಂಡಮಾರುತದಂತೆ ಸುಳಿದಾಡಿದ, ನಿರ್ದಯಿ ಕೃತ್ಯಗಳಿಂದ ಅಧಿಕಾರಿಗಳ ಧನಿಕರ ನಿದ್ದೆಗೆಡೆಸಿದ, ಎನ್ ಕೌಂಟರ್ ಆಗಲೆಂದೇ ಹುಟ್ಟಿದ, ಎನ್ ಕೌಂಟರ್ ನಲ್ಲಿ ಸಾಯಲು ನಿಶ್ಚಯಿಸಿದ, ಕೊನೆಗೆ ಹಾಗೇ ಸತ್ತ ಮೇರಾವತ್ ಭೀಮ್ಲಾನಾಯಕ್. ಕೆಡುಕುತನದ ನಂಜು ಅವನ ದೇಹದ ತುಂಬೆಲ್ಲಾ ವ್ಯಾಪಿಸಿತ್ತು, ಅವನ ಮನಸ್ಸನ್ನು ಪ್ರಳಯಾಂತಕಾರಿಯಾಗಿಸಿತ್ತು. ಆದರೂ ಅವನಲ್ಲಿ ಎಳ್ಳುಗಾತ್ರದಷ್ಟು ಒಳ್ಳೆತನವಿತ್ತು, ಆ ಒಳ್ಳೆತನದ ಪ್ರತಿಬಿಂಬ ಈ ಕೃತಿ ಎನ್ನುತ್ತಾರೆ ಕುಂವೀ.